ಬೆಳ್ಳಕ್ಕಿ ಸಾಲು ತೇಲಿ ತೇಲಿ…..

bstt
ಪ್ರತಿದಿನ ಮುಂಜಾನೆ ಕಸಗುಡಿಸುವಾಗಲೂ ತಲೆಯ ಮೇಲಿಂದ ಕ್ರರ್ ಕ್ರರ್ ಸದ್ದು ಮಾಡುತ್ತಾ ಕೊಕ್ಕರೆಗಳ ಗುಂಪು ಹಾರಿ ಹೋಗುತ್ತಿತ್ತು. ಬೆಳ್ಳಕ್ಕಿಗಳ ಈ ಹೆಜ್ಜೆ ಮೂಡದ ಹಾದಿ ನನ್ನ ಕುತೂಹಲವನ್ನು ತೀವ್ರವಾಗಿ ಕೆರಳಿಸಿತ್ತು. ಪ್ರತಿದಿನ ಸಂಜೆ ಶಾಲೆಯಿಂದ ಹಿಂದಿರುಗಿದ ಮೇಲೆ ಬುಡಮೇಲಾದ ಗೇರು ಮರದ ಮೇಲೆ ಕುಳಿತು ಅವುಗಳ ಹಾರಾಟವನ್ನು ಗಮನಿಸೋದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿ ಬಿಟ್ಟಿತ್ತು. ಒಂದು ಸಾಮಾನ್ಯ ಬಕಪಕ್ಷಿಯಲ್ಲಿ ಅಂತದ್ದೇನು ವಿಶೇಷವಿದ್ದಿರಬಹುದು? ಎಂದು ನೀವು ಯೋಚಿಸಬಹುದು..!

             ಅಂದು ಮಾಘಿಯ ಚಳಿಯ ತೀವ್ರತೆ ಎಷ್ಟಿರುತ್ತಿತ್ತೆಂದರೆ ನರನಾಡಿಗಳೆಲ್ಲ ಮರಗಟ್ಟಿ, ರಕ್ತ ಹೆಪ್ಪುಗಟ್ಟುವಂತಿರುತಿತ್ತು. ಆರಡಿ ದೂರದಲ್ಲಿ ಯಾರಾದರೂ ನಿಂತಿದ್ದರೂ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದಷ್ಟು ದಟ್ಟವಾಗಿ ಮಂಜು ಬೀಳುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕುಳಿರ್ಗಾಳಿ ಬೀಸುವಾಗ ಮಂಜಿನೊಂದಿಗೆ ಚಳಿಯು ಮಾಯವಾಗಿ ಶಾಖವು ಮೈ ಸೋಕಿದಾಗ ಅದೇನೋ ಅವ್ಯಕ್ತ ಆನಂದವುಂಟಾಗುತ್ತಿತ್ತು. ಅಂತಹ ಚಳಿಯಲ್ಲೂ ಆಹಾರ ಹುಡುಕಲು ಹೊರಡುತ್ತಿದ್ದ ಹಕ್ಕಿಗಳ ಕಲರವವನ್ನು ಕೇಳುವುದೇ ಒಂದು ಅದ್ಭುತವಾದ ಅನುಭವ! ನಾನೂ ಬೆಳಗ್ಗೆ ಬೇಗ ಏಳುತ್ತಿದ್ದೆ, ಮನೆಯಲ್ಲಿ ಹೆಣ್ಣುಮಕ್ಕಳಿಲ್ಲದಿದ್ದುದರಿಂದ ಅಂಗಳದ ಕಸ ಗುಡಿಸುವ ಕಾಯಕ  ನನ್ನ ಪಾಲಿಗೇ ಬಿದ್ದಿತ್ತು. ಪ್ರತಿದಿನ ಮುಂಜಾನೆ ಕಸಗುಡಿಸುವಾಗಲೂ ತಲೆಯ ಮೇಲಿಂದ ಕ್ರರ್ ಕ್ರರ್ ಸದ್ದು ಮಾಡುತ್ತಾ ಕೊಕ್ಕರೆಗಳ ಗುಂಪು ಹಾರಿ ಹೋಗುತ್ತಿತ್ತು. ಬೆಳ್ಳಕ್ಕಿಗಳ ಈ ಹೆಜ್ಜೆ ಮೂಡದ ಹಾದಿ  ನನ್ನ ಕುತೂಹಲವನ್ನು ತೀವ್ರವಾಗಿ ಕೆರಳಿಸಿತ್ತು. ಪ್ರತಿದಿನ ಸಂಜೆ ಶಾಲೆಯಿಂದ ಹಿಂದಿರುಗಿದ ಮೇಲೆ ಬುಡಮೇಲಾದ ಗೇರು ಮರದ ಮೇಲೆ ಕುಳಿತು ಅವುಗಳ ಹಾರಾಟವನ್ನು ಗಮನಿಸೋದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿ ಬಿಟ್ಟಿತ್ತು. ಒಂದು ಸಾಮಾನ್ಯ ಬಕಪಕ್ಷಿಯಲ್ಲಿ ಅಂತದ್ದೇನು ವಿಶೇಷವಿದ್ದಿರಬಹುದು? ಎಂದು ನೀವು ಯೋಚಿಸಬಹುದು..!

Continue reading ಬೆಳ್ಳಕ್ಕಿ ಸಾಲು ತೇಲಿ ತೇಲಿ…..

ಸ್ವಚ್ಛ ಭಾರತ ಮತ್ತು ನಾವು…

nh-copy2

            ಮಧ್ಯಾಹ್ನ ಸುಮಾರು ೧.೦೦ ಗಂಟೆ, ಕಣ್ಣು ಅನಿಯಂತ್ರಿತವಾಗಿ ಗೋಡೆಗೆ ತಗಲು ಹಾಕಿದ್ದ ಗಡಿಯಾರದ ಕಡೆಗೆ ವಾಲಿತು. ಹಸಿವಾಯಿತೆಂದರೆ ಏನೂ ಕೆಲಸ ಮಾಡಲು ಮನಸ್ಸು ಬರಲ್ಲ. ಹೋಟೇಲಿಗೆ ಹೋಗಿ ಹೊಟ್ಟೆಗೆ ಏನಾದರೂ ಹಾಕಿಕೊಂಡು ಬರೋಣವೆನ್ನುವ ಯೋಚನೆಯಲ್ಲಿ ಕಾಂಪೌಂಡು ಹೊರಗೆ ಹೆಜ್ಜೆ ಹಾಕುತ್ತಾ, ಗೆಳೆಯನೋರ್ವನಿಗೆ ಕರೆ ಮಾಡಿ ಅವನನ್ನು ಊಟಕ್ಕೆ ಆಹ್ವಾನಿಸಿ ರಸ್ತೆ ಬದಿಯ ನೇರಳೆ ಮರದಡಿ ನಿಂತೆ. ನೇರಳೆ ಹಣ್ಣಿನ ಅದ್ಭುತವಾದ ರುಚಿಯನ್ನು ನೆನೆಸಿಕೊಂಡಾಗ ಬಾಯಲ್ಲಿ ನೀರೂರಿತು. ವೇಗವಾಗಿ ಬಂದು ನಿಂತ ಬಸ್ಸಿನ ಬ್ರೇಕ್ ಸದ್ದು ಮನಸ್ಸಿನ ಯೋಚನೆಯ ಓಟಕ್ಕೂ ಬ್ರೇಕ್ ಹಾಕಿತು. ಪ್ರತಿಷ್ಟಿತ ವಿದ್ಯಾಸಂಸ್ಥೆಯ ಹೆಸರನ್ನು ಮೈ ತುಂಬಾ ಬರೆಸಿಕೊಂಡ ಬಸ್ಸಾಗಿತ್ತು ಅದು. ಯಾವುದೋ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ! ಚಾಲಕನಿಗೆ ಏನೋ ಸಂಶಯ, ತಾವು ಹೋಗಬೇಕಾದ ದಾರಿಯ ಬಗ್ಗೆ. ಬಸ್ಸು ನಿಂತಾಕ್ಷಣ ಎಲ್ಲ ಕಿಟಕಿ ಬಾಗಿಲುಗಳು ತೆರೆದುಕೊಂಡವು. ಬಾಗಿಲಿನಿಂದ ಕಂಡಕ್ಟರ್ ಇಳಿದು ವಿಚಾರಣೆಗೆಂದು ನಡೆದಿದ್ದ. ನಾನು ಗಮನಿಸುತ್ತಿದ್ದೆ, ಎಲ್ಲ ಕಿಟಕಿಯ ಕಡೆಯಿಂದಲೂ ಲೇಸ್, ಕುರ್ಕುರೆಯ ಖಾಲಿ ಪ್ಯಾಕೆಟ್ ಗಳು, ಪೆಪ್ಸಿ, ಕೋಲಾದ ಬಾಟಲ್ ಗಳು ಹೊರಗೆ ಎಸೆಯಲ್ಪಟ್ಟವು. ಸ್ವಲ್ಪ ಸಮಯದಲ್ಲಿ ಬಸ್ಸು ಬುರ್ರನೆ ಸದ್ದು ಮಾಡುತ್ತಾ ಮಾಯವಾಯಿತು. ಕೆಳಗೆ ಅಷ್ಟೊಂದು ಪ್ಲಾಸ್ಟಿಕ್ ರಾಶಿಯನ್ನು ನೋಡುವ ದೌರ್ಭಾಗ್ಯ ನೇರಳೆ ಮರದ ಜೊತೆ ನನ್ನದೂ ಆಯಿತು.

Continue reading ಸ್ವಚ್ಛ ಭಾರತ ಮತ್ತು ನಾವು…